ಒಟ್ಟಾಗಿ ಸಾಗೋಣll
ಬಾಬಾ ಸಾಹೇಬರ ಮಾತು
ಮರಿಬೇಡ ಹುಚ್ಚ ಮನುಜ
ಗೊಂಬೆ ಅಲ್ಲವೋ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು
ಅಂಬೇವಾಡಿಲಿ
ಅಂಬೆಗಾಲಿಟ್ಟ ಕಂದನೋ
ಅವಮಾನ ಎದುರಿಸಿ
ಬೋಧಿಯಾದನೋll
ಜ್ಞಾನ ಸಂಪಾದಿಸಿ
ಅಜ್ಞಾನ ಒಡೆದೊಡಿಸಿll
ದೇಶವೇ ದಾಟಿ ಹೋಗಿ
ಜಾತಿಯೇ ಮೀರಿ ಬಂದ
ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...
ಒಂದೇ ತಾಯಿಯ
ಮಕ್ಕಳು ನಾವೆಲ್ಲ
ಭೇದ ಭಾವವು
ನಮಗೆ ಬೇಕಿಲ್ಲll
ನಾವು ಬಹು ಜನರೆಲ್ಲ
ಒಟ್ಟಾಗಿ ಬಾಳೊಣಂತll
ಮನುವಾದ ಸಿದ್ದಾಂತವ
ಹರಿದು ಸಂವಿಧಾನ ಬರೆದ
ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...
ಅಸ್ಪೃಶ್ಯ ಎಂದರು
ಊರ ಹೊರಗೆ ಇಟ್ಟರು
ಮುಕ್ಕೊಟಿ ದೇವರು
ನಿನಗೆ ಕಾಣರುll
ಬುದ್ದನ್ನೆ ನಂಬೋಣ
ನವ ಭಾರತ ನಿರ್ಮಾಣ ಮಾಡೋಣll
ಅವರೆ ನಮ್ಮ ದಿಕ್ಸೂಚಿ
ಸೆರೋಣ ಅವರ ಮಾರ್ಗದಿ ನಡೆದು
ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...
#ಭೀಮರಾಯ ಬಡಿಗೇರ್, ಮಾಲಗತ್ತಿ
No comments:
Post a Comment