Tuesday, 3 January 2023

ಗೊಂಬೆ ಅಲ್ಲವೊ ಬಾಬಾ ಸಾಹೇಬ

ನಮಗೊಂದೆ ಮಾರ್ಗ
ಒಟ್ಟಾಗಿ ಸಾಗೋಣll
ಬಾಬಾ ಸಾಹೇಬರ ಮಾತು
ಮರಿಬೇಡ ಹುಚ್ಚ ಮನುಜ
ಗೊಂಬೆ ಅಲ್ಲವೋ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು

ಅಂಬೇವಾಡಿಲಿ
ಅಂಬೆಗಾಲಿಟ್ಟ ಕಂದನೋ
ಅವಮಾನ ಎದುರಿಸಿ
ಬೋಧಿಯಾದನೋll
ಜ್ಞಾನ ಸಂಪಾದಿಸಿ
ಅಜ್ಞಾನ ಒಡೆದೊಡಿಸಿll
ದೇಶವೇ ದಾಟಿ ಹೋಗಿ
ಜಾತಿಯೇ ಮೀರಿ ಬಂದ

ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...


ಒಂದೇ ತಾಯಿಯ
ಮಕ್ಕಳು ನಾವೆಲ್ಲ
ಭೇದ ಭಾವವು
ನಮಗೆ ಬೇಕಿಲ್ಲll
ನಾವು ಬಹು ಜನರೆಲ್ಲ
ಒಟ್ಟಾಗಿ ಬಾಳೊಣಂತll
ಮನುವಾದ ಸಿದ್ದಾಂತವ
ಹರಿದು ಸಂವಿಧಾನ ಬರೆದ

ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...

ಅಸ್ಪೃಶ್ಯ ಎಂದರು
ಊರ ಹೊರಗೆ ಇಟ್ಟರು
ಮುಕ್ಕೊಟಿ ದೇವರು
ನಿನಗೆ ಕಾಣರುll
ಬುದ್ದನ್ನೆ ನಂಬೋಣ
ನವ ಭಾರತ ನಿರ್ಮಾಣ ಮಾಡೋಣll
ಅವರೆ ನಮ್ಮ ದಿಕ್ಸೂಚಿ
ಸೆರೋಣ ಅವರ ಮಾರ್ಗದಿ ನಡೆದು

ಗೊಂಬೆ ಅಲ್ಲವೊ
ಬಾಬಾ ಸಾಹೇಬ
ಅವರ ತ್ಯಾಗವೇ
ನಮ್ಮ ಬದುಕು...


           #ಭೀಮರಾಯ ಬಡಿಗೇರ್, ಮಾಲಗತ್ತಿ  

No comments:

Post a Comment